ದಾವಣಗೆರೆ: ನಿನ್ನೆ ತಡ ರಾತ್ರಿ ಸಿಡಿಲು ಹೊಡೆದ ಪರಿಣಾಮ ತೆಂಗಿನ ಮರದಲ್ಲಿ ಬೆಂಕಿ ಹೊತ್ತಿ ಉರಿದಿದೆ. ನಗರದ ಪಿ.ಜೆ. ಬಡಾವಣೆ 4ನೇ ಮೇನ್ನ ಜೈನ್ ಶಾಲೆ ಬಳಿ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ ಭಾರೀ ಗುಡುಗು, ಸಿಡಿಲಿನ ಸದ್ದು ಕಾಣಿಸಿಕೊಂಡಿದ್ದು, ಶ್ರೀನಿವಾಸ್ ಎನ್ನುವರ ತೆಂಗಿನ ಮರಕ್ಕೆ ಸಿಡಿಲು ಹೊಡೆದಿದೆ. ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುತ್ತಲಿನ ಮನೆಯವರು ಗಾಬರಿಗೊಂಡು ಮನೆಯಿಂದ ಹೊರ ಬಂದಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿತು. ಸಿಡಿನ ಹೊಡೆತಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಸಿಡಿಲಿನ ಹೊಡೆತಕ್ಕೆ ಟಿವಿ ಸೆಟ್ ಬಾಕ್ಸ್, ಯುಪಿಎಸ್, ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹೋಗಿವೆ.



