ದಾವಣಗೆರೆ: ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದ ಎಲೆಬೇತೂರು ಜೋಡಿ ಕೊಲೆ ಪ್ರಕರಣದ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಗದು, ಬಂಗಾರ ವಶ ವಶಕ್ಕೆ ಪಡೆಯಲಾಗಿದೆ.
ದಿನಾಂಕ 24-01-2022 ರಂದು ರಾತ್ರಿ ಎಲೆಬೇತೂರು ಗ್ರಾಮದ ಗುರುಸಿದ್ದಯ್ಯ ಮತ್ತು ಸರೋಜಮ್ಮ ದಂಪತಿಗಳನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ವೇಳೆ ಮನೆಯಲ್ಲಿದ್ದ ನಗದು ಮತ್ತು ಬಂಗಾರವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಜೋಡಿ ಕೊಲೆ ಪ್ರಕರಣದಲ್ಲಿ ಒಟ್ಟು ಮೂರು ಜನ ಆರೋಪಿತರನ್ನು ಬಂಧಿಸಿದ್ದು, ಆರೋಪಿತರು ಮನೆಯಿಂದ ದೋಚಿಕೊಂಡು ಹೋಗಿದ್ದ 1,75,000 ನಗದು ಹಣ, 188 ಗ್ರಾಂ ಬಂಗಾರದ ಆಭರಣಗಳು ಸೇರಿ ಒಟ್ಟು 9, 27,000 ರೂ. ಹಾಗೂ ಒಂದು ಬೈಕನ್ನು ಅಮಾನತ್ತು ಮಾಡಲಾಗಿದೆ.
ಪ್ರಕರಣದಲ್ಲಿ ಮಿಥುನ್ ಹೆಚ್.ಎನ್. ಐಪಿಎಸ್ (ಪ್ರೊಬೆಷನರಿ), ಬಿ.ಎಸ್.ಬಸವರಾಜ್ ಪೊಲೀಸ್ ಉಪಾಧೀಕ್ಷಕ, ಡಿಸಿಆರ್ಬಿ ಘಟಕ, ರುದ್ರೇಶ್ ಪೊಲೀಸ್ ಉಪಾಧೀಕ್ಷಕ, ಲಿಂಗನಗೌಡ ನೆಗಳೂರು, ಪಿಐ ಲಕ್ಷ್ಮಣ್ ಪಿಎಸ್ಐ, ಹಾಗೂ ಡಿಸಿಆರ್ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಎಂ. ಆಂಜನಪ್ಪ ಎಎಸ್ಐ, ಕೆ.ಸಿ ಮಜೀದ್, ಕೆ.ಟಿ.ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಹೆಚ್.ಆರ್.ನಟರಾಜ್, ಈ.ಬಿ.ಅಶೋಕ, ಆರ್.ರಮೇಶ್ನಾಯ್ಕ್, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ಮಂಜನಗೌಡ, ದೇವೇಂದ್ರ ನಾಯ್ಕ, ಮಹೇಶ್, ರಾಜು ಲಂಬಾಣಿ, ಷಣ್ಮುಖ, ಮಂಜುನಾಥ, ನಾಗರಾಜಯ್ಯ, ಅಣ್ಣಪ್ಪ, ರಾಘವೇಂದ್ರ, ಉಮೇಶ್ ಬಿಸ್ನಾಳ, ಶಾಂತರಾಜ್, ಬಸವರಾಜ್, ನಿಂಗರಾಜ್, ನೂರುಲ್ಲಾ ಷರೀಫ್, ನೂರ್ಉಲ್ಲಾ ಇವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇವರ ಕಾರ್ಯವನ್ನು ಎಸ್ ಪಿ ಸಿ.ಬಿ.ರಿಷ್ಯಂತ್ ಶ್ಲಾಘಿಸಿದ್ದಾರೆ.



