ದಾವಣಗೆರೆ: ಕಳ್ಳತನದ ಪ್ರತ್ಯೇಕ ಎರಡು ಪ್ರಕರಣಕ್ಕೆ ಸಬಂಧಿಸಿದಂತೆ ನಾಲ್ವರು ಆರೋಪಿತರ ಬಂಧಿಸಲಾಗಿದ್ದು, 5.20 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ದಿನಾಂಕ:-15-01-2022 ರಂದು ರಾತ್ರಿ ಹರಿಹರ ತಾಲ್ಲೂಕು ಬನ್ನಿಕೋಡು ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣದ ಕಬ್ಬಿಣ ಕಳುವಾದ ಬಗ್ಗೆ ಕಂಟ್ರಾಕ್ಟರ್ ಹೆಚ್. ಶಿವಕುಮಾರ್ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಹಾಗೂ
ದಿನಾಂಕ: 27-01-22 ರಂದು ರಾತ್ರಿ ಹರಿಹರದ ಅಮರಾವತಿ ಗ್ರಾಮದಲ್ಲಿ ಸುರೇಶ್ಸೇರಿದ ರೂಟಿವೇಟರ್ ಕಳುವಾದ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಎರಡು ಪ್ರಕರಣದ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಡಿವೈಎಸ್ಪಿ ದಾವಣಗೆರೆ ಗ್ರಾಮಾಂತರ ರವರ ಹಾಗೂ ಸಿಪಿಐ, ಹರಿಹರ ವೃತ್ತ ರವರ ಮಾರ್ಗದರ್ಶನದಲ್ಲಿ ವೀರಬಸಪ್ಪ ಕುಸಲಾಪುರ, ಪಿಎಸ್ಐ, ಹರಿಹರ ಗ್ರಾಮಾಂತರ ಠಾಣೆ ರವರ ನೇತೃತ್ವದ ತಂಡ ದ 04 ಜನ ಆರೋಪಿತರನ್ನು ಬಂಧಿಸಲಾಗಿದೆ. ಆರೋಪಿತರಿಂದ ಸುಮಾರು ಒಂದು ಲಕ್ಷ ಮೌಲ್ಯದ ಕೆ. ಜಿ ಕಬ್ಬಿಣ, ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಮೌಲ್ಯದ ರೂಟಿವೇಟರ್ ಮತ್ತು ಕೃತ್ಯಕ್ಕೆ ಬಳಸಿದ್ದ ಮೂರು ಲಕ್ಷ ಮೌಲ್ಯದ ಮಜಡಾ ಲಾರಿಯನ್ನು ಸೇರಿ ಅಂದಾಜು ಒಟ್ಟು 5.20 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿತನು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಪ್ರಕರಣದ ಆರೋಪಿ ಮತ್ತು ಸ್ವತ್ತು ಪತ್ತೆ ಕಾರ್ಯದಲ್ಲಿ ವೀರಬಸಪ್ಪ ಕುಸಲಾಪುರ ಪಿಎಸ್ಐ, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ & ಸಿಬ್ಬಂದಿಯವರಾದ ಎಎಸ್ಐ ಮಂಜುಳಾ, ಸೈಯ್ಯದ್ ಗಫಾರ್, ದ್ವಾರಕೀಶ್, ಕರಿಯಪ್ಪ, ವೆಂಕಟೇಶ, ಶ್ರೀಧರ ಬಣಕಾರ, ಹಳ್ಳಿ ಮಹಾಂತೇಶ, ಅನಿಲ್ ಕುಮಾರ್, ಆನಂದ, ನವೀನ, ರಮೇಶ್, ಹಜರತ್ ಅಲಿ, ಬಾಲರಾಜನಾಯ್ಕ, ಸುಶೀಲಮ್ಮ, ಸಿದ್ದಪ್ಪ ರಾಘವೇಂದ್ರ ಮತ್ತು ಶಾಂತರಾಜ ಭಾಗವಹಿಸಿದ್ದರು.



