ಡಿವಿಜಿ ಸುದ್ದಿ, ಹೊಸಕೋಟೆ: ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದ ಎಂ.ಟಿ.ಬಿ. ನಾಗರಾಜ್ ಬೆನ್ನಿಗೆ ಚೂರಿ ಹಾಕಿದ ಒಬ್ಬ ದ್ರೋಹಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಹೊಸಕೋಟೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಸಲ್ಲಿಕೆ ಸಂದರ್ಭದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು,ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಎಂಟಿಬಿ ಒಬ್ಬ ದ್ರೋಹಿ. ಮಾತು ಎತ್ತಿದರೆ ಸಾಕು ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಅಂತಿದ್ರು. ಆದರೆ, ಈಗ ಎದೆಯಲ್ಲಿ ಯಡಿಯೂರಪ್ಪ ಅವರನ್ನ ಇಟ್ಟುಕೊಂಡವನೇ ಎಂದು ಏಕವಚನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಎಂಟಿಬಿಯನ್ನು ಸಚಿವರನ್ನಾಗಿ ಮಾಡಿದ್ದೆ, ನಿಗಮ ಮಂಡಳಿ ಅಧ್ಯಕ್ಷರನ್ನಾಗಿಯೂ ಕೂಡ ಮಾಡಿದ್ದೆ. ಸಾಕಷ್ಟು ಅನುದಾನವನ್ನು ಕೊಟ್ಟಿದ್ದೆ. ಈಗ ನನ್ನ ವಿರುದ್ಧನೇ ಮಾತಾಡುತ್ತಾನೆ. ನೀವು ಸ್ವಾಭಿಮಾನಿಗಳಾದ್ರೆ ಎಂಟಿಬಿಯನ್ನ ಸೋಲಿಸಿ ಎಂದ್ರು.
ಈ ಸಲ ಎಂಟಿಬಿ ಮೂರನೇ ಸ್ಥಾನಕ್ಕೆ ಹೋಗ್ತಾನೆ. ಎರಡನೇ ಸ್ಥಾನ ಪಕ್ಷೇತರ ಅಭ್ಯರ್ಥಿ ಪಡೆಯಬಹುದು. ಪಕ್ಷಕ್ಕೆ ದ್ರೋಹ ಮಾಡಿದ ಅನರ್ಹರು ಯಾರು ಗೆಲ್ಲಲ್ಲ ಎಂದರು.



