ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ದೂಢ) ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು ಇಂದು ವಿನಾಯಕ, ವಿವೇಕಾನಂದ ಬಡಾವಣೆಯಲ್ಲಿನ ಪಾರ್ಕ್ ಪ್ರಗತಿ ಪರಿಶೀಲಿಸಿದರು. ಈ ವೇಳೆ ಕಳಪೆ ಕಾಮಗಾರಿ ಕಂಡು ಅಧಿಕಾರಿಗಳನ್ನು ತರಾಟೆಗೆ ತಗೆರದುಕೊಂಡರು.
ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಿವಕುಮಾರ್, ಈ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸದೇ ಟೆಂಡರ್ ದಾರರಿಗೆ ಬಿಲ್ ಮಾಡಿಕೊಡುತ್ತೀರಾ..? ಎಂದು ಅಧಿಕಾರಿಗಳನೆನು ತರಾಟೆಗೆ ತೆಗೆದುಕೊಂಡರು. ನನ್ನ ಆಡಳಿತ ಕಾಲಾವಧಿಯಲ್ಲಿ ಯಾವುದೇ ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ. ಕಳಪೆ ಕಾಮಗಾರಿ ಮಾಡಿರುವ ಟೆಂಡರುದಾರರ ಬಿಲ್ ತಡೆಹಿಡಿಯಲು ತಾಕಿತ್ ಮಾಡಿ ಎಂದು ಸೂಚನೆ ನೀಡದರು. ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಗೌರಮ್ಮ ಪಾಟೀಲ್, ಮಾರುತಿರಾವ್ ಘಾಟ್ಗೆ, ಆರ್ ಲಕ್ಷ್ಮಣ, ಪ್ರಾಧಿಕಾರದ ಅಭಿಯಂತರ ಸೃಜನ್ ಉಪಸ್ಥಿತಿರಿದ್ದರು.



