ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ಹೋಬಳಿಯ ಹೊನ್ನಾನಾಯಕನಹಳ್ಳಿ ಗ್ರಾಮದ ಚೌಡೇಶ್ವರಿ ದೇವಿಗೆ ಹಾಕಿದ್ದ 75 ಸಾವಿರ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಕಳ್ಳತನವಾಗಿವೆ.
ಎಂದಿನಂತೆ ದೇವಸ್ಥಾನದ ಪೂಜಾರಿ ಬೆಳಗ್ಗೆ ಪೂಜೆ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಈ ವೇಳೆ ಕಳ್ಳತನ ನಡೆದಿದ್ದು, ಕಲ್ಲೇಶ್ ಎಂಬುವರು ಪೂಜೆಗೆ ಬಂದ ವೇಳೆ ದೇವಿಯ ವಿಗ್ರಹದ ಮೇಲೆ ತಾಳಿ ಇಲ್ಲದಿದ್ದಾಗ ಅನುಮಾನ ಬಂದು ನೋಡಿದ್ದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ದೇವಿ ಮೈಮೇಲಿದ್ದ 1 ಬಂಗಾರದ ಮೂಗುತಿ, 1 ತಾಳಿ, 2 ಬೆಂಡೊಲೆ, 1ಬಂಗಾರ ಸರ, 1ಬೆಳ್ಳಿಯ ಗಿಣಿ ಕಳ್ಳತನವಾಗಿವೆ.



