ಹೊನ್ನಾಳಿ: ಕೋವಿಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯುವಕನೊಬ್ಬ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರನ್ನು ಏರು ಧ್ವನಿಯಲ್ಲಿ ಕ್ಲಾಸ್ ತೆಗೆದುಕೊಂಡನು.
ಸಚಿವರು ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮಾದನಬಾವಿ ಗ್ರಾಮ ಭೇಟಿ ನೀಡಿದ ವೇಳೆ ಈ ಘಟನೆ ನಡೆಯಿತು. ಸೋಂಕಿತ ಯುವಕನ ಏರು ಧ್ವನಿ ಯಲ್ಲಿ ಆಸ್ಪತ್ರೆ ಕಸ ಹೊಡೆಯುವರು ಸಹಿತ ಒಳಗೆ ಬರುತ್ತಿಲ್ಲ. ಕಸ ಹಾಗೆಯೇ ಬಿದ್ದಿದೆ. ಮಾಡೋವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ರೆ ನಾವು ಹೀಗೆ ಮಾತನಾಡದಕ್ಕೆ ಆಗುತ್ತಾ..?. ಆಸ್ಪತ್ರೆಯಲ್ಲಿ ಯಾವ ವ್ಯವಸ್ಥೆ ಸರಿ ಇಲ್ಲ. ಸರಿಯಾಗಿ ಊಟ ಕೊಟ್ಟಿಲ್ಲ. ಡಾಕ್ಟರ್ ಗಳು ಯಾರು ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ ಆಕ್ರೋಶ ವ್ಯಕ್ತಪಡಿಸಿದನು.
ಆಗ ಯುವಕನಿಗೆ ಸಮಾಧಾನಪಡಿಸಿದ ಶಾಸಕ ಎಂಪಿ ರೇಣುಕಾಚಾರ್ಯ, ನನಗೆ ಕೋವಿಡ್ ಬಂದಾಗ ನಾನೇ ಟಾಯ್ಲೆಟ್ ಕ್ಲಿನ್ ಮಾಡ್ಕೊಂಡಿದೀನಿ. ನಾನೇ ಬಟ್ಟೆ ಒಗೆದುಕೊಂಡಿದೀನಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆಯಾ ಕ್ಷೇತ್ರದ ಶಾಸಕರು, ಸಂಸದರು, ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಎಸ್ ಪಿ ಸೇರಿದಂತೆ ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.



