ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ವುತ್ತಿರುವ ಹಿನ್ನೆಲೆ ಇಂದು ಬೆಳ್ಳಂಬೆಳಗೆ ಎಪಿಎಂಸಿ ಆವರಣದಲ್ಲಿ ಫೀಲ್ಡ್ ಇಳಿದ್ದ ಡಿಸಿ, ಎಸ್ ಪಿ ಮಾಸ್ಕ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಮಾಸ್ಕ್ ಧರಿಸದೇ ಕಿರಿಕ್ ಮಾಡಿದ ವ್ಯಾಪಾರಿಗೆ ಎಸ್ ಪಿ ಕೆನ್ನೆಗೆ ಬಾರಿಸಿಸರು. ಡಿಸಿ ಕೊರಳ ಪಟ್ಟಿ ಹಿಡಿದ ದಂಡ ವಿಧಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ನಗರದಲ್ಲಿ ಮಾಸ್ಕ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯೋರ್ವನನ್ನು ಗದರಿದ ಎಸ್ಪಿ ಹನುಮಂತರಾಯ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ ಅದಕ್ಕೊಪ್ಪದ ವ್ಯಾಪಾರಿಯು ವಾಗ್ವಾದಕ್ಕಿಳಿದಿದ್ದರಿಂದ ಕೋಪಗೊಂಡ ಎಸ್ಪಿ ಹನುಮಂತರಾಯ ಅವರು ವ್ಯಾಪಾರಿಗೆ ಕಪಾಳ ಮೋಕ್ಷ ಮಾಡಿದರು.

ಆನಂತರವೂ ವ್ಯಾಪಾರಿ ವಾಗ್ವಾದ ಮುಂದುವರಿಸಿದ್ದಲ್ಲದೆ ದಂಡ ಪಾವತಿಸಲು ನಿರಾಕರಿಸಿದ್ದರಿಂದ ಪೊಲೀಸರು ಆತನನ್ನು ಅಲ್ಲಿಂದ ಬಲವಂತವಾಗಿ ಕರೆದೊಯ್ದರು.



