Connect with us

Dvgsuddi Kannada | online news portal | Kannada news online

ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಯ ನುಸಿ ರೋಗ ನಿರ್ವಹಣೆ ಹೇಗೆ..?

ಪ್ರಮುಖ ಸುದ್ದಿ

ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಯ ನುಸಿ ರೋಗ ನಿರ್ವಹಣೆ ಹೇಗೆ..?

ದಾವಣಗೆರೆ: ದಾವಣಗೆರೆ ತಾಲ್ಲೂಕಿನಲ್ಲಿ ನುಸಿ ರೋಗದ ಬಾಧೆ ಹೆಚ್ಚುತ್ತಿದ್ದು, ಶ್ಯಾಗಲೆ, ಆನಗೋಡು, ಬಿಸಲೇರಿ, ಓಬೇನಹಳ್ಳಿ ಹಾಗೂ ಮುಂತಾದ ಹಳ್ಳಿಗಳಲ್ಲಿ ನುಸಿ ರೋಗದ ಲಕ್ಷಣಗಳು ಹೆಚ್ಚಾಗಿ ಕಂಡುಬಂದಿದ್ದು, ಇದರ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಕೀಟವು ಸೂಕ್ಷ್ಮ ಜೇಡರ ನುಸಿಗಳಾಗಿದ್ದು, ಕೆಂಪು ಅಥವಾ ಬಿಳಿ ಬಣ್ಣದ್ದಾಗಿರುತ್ತವೆ. ಈ ಕೀಟಗಳು ಅಡಿಕೆ ಎಲೆಗಳ ಕೆಳಭಾಗದಲ್ಲಿ ಗುಂಪಾಗಿ ಕಂಡುಬರುತ್ತವೆ. ಇವು ಗರಿಗಳಲ್ಲಿ ರಸಹೀರುವುದರಿಂದ ಕೀಟ ಬಾಧೆಗೊಳಗಾದ ಎಲೆಗಳು ಹಳದಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಒಮ್ಮೊಮ್ಮೆ ಕಾಯಿಗಳೂ ಕೀಟ ಬಾಧೆಗೆ ತುತ್ತಾಗುತ್ತವೆ. ತೆಂಗಿನಲ್ಲಿ ಕಾಯಿಗಳ ಮೇಲೆ ತ್ರಿಕೋನಾಕಾರದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ಕಾಯಿಗಳು ಬಿರುಕು ಮೂಡಿ ಉದುರುತ್ತವೆ. ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತವೆ.

ಕೀಟ ಬಾಧೆ ನಿಯಂತ್ರಿಸಲು ವಹಿಸಬೇಕಾದ ಕ್ರಮಗಳೆಂದರೆ ಕೀಟ ಬಾಧೆಗೊಳಗಾದ ಸಸಿಗಳನ್ನು ನಾಟಿಗೆ ಬಳಸಬಾರದು. ಕೀಟ ಬಾಧೆ ಹೆಚ್ಚಿದ್ದಲ್ಲಿ ಪ್ರತಿ ಲೀಟರ್ ನೀರಿಗೆ ಡೈಕೋಫಾಲ್ ಬೆರೆಸಿ, ಎಲೆಯ ಕೆಳಭಾಗಕ್ಕೆ ಸಿಂಪಡಿಸಬೇಕು. ಅವಶ್ಯಕತೆ ಇದ್ದಲ್ಲಿ 15 ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪಡಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮಣ್ಣನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top