ಬೆಂಗಳೂರು: ಇನ್ಮುಂದೆ ಮದುವೆ ಕಲ್ಯಾಣ ಮಂಟಪ ಬುಕ್ ಮಾಡಲು ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ವಿವಿಧ ಸಭೆ-ಸಮಾರಂಭದಲ್ಲಿ ಭಾಗವಹಿಸುವ ಜನರ ನಿಯಂತ್ರಣಕ್ಕೂ ಜಿಲ್ಲಾಧಿಕಾರಿಗಳನ್ನೇ ಸರ್ಕಾರ ಹೊಣೆ ಮಾಡಲಿದೆ.
ಕೊರೋನಾ ನಿಯಂತ್ರಣ ಕುರಿತಂತೆ ವಿವಿಧ ಅಧಿಕಾರಿಗಳು ಸಭೆ ನಡೆಸಲಾಯಿತು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಕೊರೊನಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಮದುವೆಗೆ ಇಂತಿಷ್ಟೇ ಜನರು ಬರುವಂತೆ ಡಿಸಿ ಪಾಸ್ ನೀಡುವರು ಎಂದರು .
ಕಲ್ಯಾಣ ಮಂಟಪವನ್ನು ಬುಕ್ಕಿಂಗ್ ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಈಗಾಗಲೇ ಕಲ್ಯಾಣ ಮಂಟಪ ಬುಕ್ ಮಾಡಿದ್ರೆ ಸಮಸ್ಯೆ ಇಲ್ಲ. ಸಂಜೆಯಿಂದ ಯಾರು ಕಲ್ಯಾಣ ಮಂಟಪಗಳನ್ನು ಬುಕ್ ಮಾಡುವರು, ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ. ಮದುವೆಯಲ್ಲಿ ಜನಜಂಗುಳಿ ಸೇರಿಸಿದರೆ ಎಫ್ ಐಆರ್ ದಾಖಲಿಸಲಾಗುವುದು. ಇನ್ನು ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಒಂದು ತಿಂಗಳ ಮೊದಲೇ ಸ್ಥಳ ಪರಿಶೀಲಿಸಿ ನಿರ್ಬಂಧಿಸಬೇಕೆಂದರು.



