ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಎರಡು ವರ್ಷ ಅವಕಾಶ ಕೊಟ್ಟಿದ್ದಾರೆ. ಅದೇ ಅವರಿಗೆ ಹೆಚ್ಚಾಯ್ತು ಎಂದು ಸಿಎಂ ಬಿಎಸ್ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಮತ್ತೆ ಕಿಡಿಕಾರಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲ್ಲ ಎಂದು ಹೇಳಿಕೆ ಬಗ್ಗೆ ಮಾತನಾಡಿದ ಅವರು, ಯಾರ್ಯಾರ ನಾಯಕತ್ವ ಎಷ್ಟಿದೆ ಗೊತ್ತಾಗುತ್ತೆ. ನೀವು ಅವರನ್ನೇ ಕೇಳಬೇಕು. ಅವರು ರಾಜ್ಯಪಾಲರ ಭೇಟಿ ಮಾಡಿದರು. ಅದು ನನಗೇನೂ ಗೊತ್ತಿರಲಿಲ್ಲ ಎಂದರು.
ಏಪ್ರಿಲ್ 17ರ ನಂತರ ಬಹಳ ಮಂದಿ ಅಸಮಾಧಾನ ಸ್ಫೋಟಗೊಳ್ಳಲಿದೆ. ಸೂರ್ಯ ಚಂದ್ರ ಇರುವ ವರೆಗೆ ಹೇಗೆ ಮುಖ್ಯಮಂತ್ರಿ ಆಗೋಕೆ ಸಾಧ್ಯ(?) ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಂತೆ ಯಡಿಯೂರಪ್ಪನವರಿಗೆ 370 ಕಾಯ್ದೆ ಏನಾದ್ರೂ ಅನ್ವಯ ಆಗುತ್ತಾ ಎಂದು ಪ್ರಶ್ನಿಸಿದರು. ನಮ್ಮ ಹೈಕಮಾಂಡ್ ಅಷ್ಟೇನು ವೀಕ್ ಆಗಿಲ್ಲ ಎಂದರು.



