ಹರಿಹರ: ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ನಾವು ಸರ್ಕಾರದ ತೀರ್ಮಾನಕ್ಕೆ ಕಾಯುತ್ತಿದ್ದೇವೆ ಕನಕ ಗುರುಪೀಠದಲ್ಲಿ ಸ್ವಾಮೀಜಿ ನಿರಂಜನಾನಂದಪುರಿ ಶ್ರೀ ಹೇಳಿದರು.
ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಕಾಗಿನೆಲೆ ಶಾಖಾ ಮಠದಲ್ಲಿ ವಿದ್ಯಾರ್ಥಿ ನಿಲಯ, ಮಹಾ ದ್ವಾರ ಉದ್ಘಾಟನೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ನೀವು ಕುಲ ಶಾಸ್ತ್ರೀಯ ಅಧ್ಯಯನ ಮಾಡಿಸುತ್ತೀರೊ ಅಥವಾ ಹಾಗೇಯೇ ಶಿಪಾರಸ್ಸು ಮಾಡುತ್ತೀರೋ ಎಂಬುದನ್ನು ತಿಳಿಸಿ.ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಪೀಠದ ಕನಕ ಪೀಠಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಹೊಸದುರ್ಗದಲ್ಲಿ ಕನಕದಾಸನ ಏಕಶಿಲಾ ಮೂರ್ತಿ ನಿಲ್ಲಿಸಬೇಕಿದೆ. ರಾಯಣ್ಣ ಪ್ರಾಧಿಕಾರಕ್ಕೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕು.ಉಪಚುನಾವಣೆ ಮುಗಿದ ನಂತರ ಎಸ್ ಟಿ ಮೀಸಲಾತಿ ಹೋರಾಟ ಸಮಿತಿ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ತಮಿಳು ನಾಡಿನ ಚುನಾವಣೆ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರನ್ನು ಕುರುಬ ಸಮುದಾಯ ಯಾವತ್ತು ಮರೆಯಬಾರದು. ಬಿಎಸ್ ವೈ ಸರ್ಕಾರಕ್ಕೆ ಮಠಕ್ಕೆ 10 ಕೋಟಿ ಕೊಟ್ಟಿದೆ. ಬರಡಾಗಿದ್ದ ಬೆಳ್ಳೂಡಿ ಮಠದ ಭೂಮಿ ಇದೀಗ ನಂದನವನ ಆಗಿದೆ. ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡಲು ಮುಖ್ಯಮಂತ್ರಿ ಗಳು ಶಿಫಾರಸ್ಸು ಮಾಡಬೇಕು ಎಂದರು.



