ವಿಡಿಯೋ:  ಮುಳುಗುತ್ತಿದ್ದ ಬಸ್ ಸೇವ್ ಮಾಡಿದ್ದು ಹೇಗೆ ಗೊತ್ತಾ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ಹರಪನಹಳ್ಳಿ: ಎತ್ತ ನೋಡಿದರೂ ನೀರು, ಆ ನೀರಿನ ನಡುವೆ ಸಿಕ್ಕಿ ಹಾಕಿಕೊಂಡಿರೋ ಬಸ್.. ಆ ಬಸ್ ನಲ್ಲಿದ್ದ 40 ಜನ ಪ್ರಾಣ ರಕ್ಷಣೆಗಾಗಿ ಕೂಗಲಾರಂಭಿಸಿದರು.  ಎರಡು ದಂಡೆಯಲ್ಲಿ ನಿಂತಿದ್ದ ಯುವಕರು ಹೇಗಾದ್ರೂ ಮಾಡಿ 40 ಜನ ಸೇವ್ ಮಾಡೋ ಪಣ ತೊಟ್ಟು.. ಕೊನೆಗೆ ನೀರಿನಲ್ಲಿ ಈಜಿ ಹೋಗಿ 40 ಜನರನ್ನು  ಸೇವ್ ಮಾಡಿದ್ದಲ್ಲದೆ, ಬಸ್ ಅನ್ನು ಹೊರಗೆದಿದ್ದಾರೆ.

ತಾಲೂಕಿನ ಹಲುವಾಗಲು ಗ್ರಾಮದ ಬಳಿ ಹಳ್ಳದ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಖಾಸಗಿ ಬಸ್ ಮತ್ತು  40 ಜನರನ್ನು ಊರಿನ ಯುವಕರ ಸಹಾಸದಿಂದ ಹೊರಗೆ ತೆಗೆದ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಹಲುವಾಗಲು ಗ್ರಾಮದಿಂದ ಮೈಲಾರಕ್ಕೆ ಹೊರಟ್ಟಿದ್ದ ಖಾಸಗಿ ಬಸ್ ಗರ್ಭಗುಡಿ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ  ನೀರಿನಲ್ಲಿ ಸಿಲುಕಿಕೊಂಡಿತ್ತು.

ಚಾಲಕ ನಿರ್ಲಕ್ಷ್ಯತನದಿಂದ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬಸ್ ಚಲಾಯಿಸಿದ್ದಾನೆ. ನೀರಿನ ಮಧ್ಯೆ ಭಾಗದಲ್ಲಿ ಹೋದ ತಕ್ಷಣ ಬಸ್ ಆಫ್ ಆಗಿದೆ. ಆಗ ಪ್ರಯಾಣಿಕರೆಲ್ಲಾ ಆತಂಕಗೊಂಡಿದ್ದು ಕೂಗಲಾರಂಭಿಸಿದ್ದಾರೆ.  ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ಕರೆ ತಂದರು. ನಂತರ ಹಗ್ಗದಿಂದ ಟ್ರ್ಯಾಕ್ಟರ್‌ಗೆ ಬಸ್ ಕಟ್ಟಿ ಎಳೆಸಿಕೊಂಡು ಬಸ್‌ನ್ನನ್ನು ಹೊರಗೆ ತಂದು ಸಹಾಸ ಮೆರೆದಿದ್ದಾರೆ.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *