Connect with us

Dvgsuddi Kannada | online news portal | Kannada news online

ದಾವಣಗೆರೆ ಪೊಲೀಸರ ಮಿಂಚಿನ ಕಾರ್ಯಾಚರಣೆ:  ರಾಯಚೂರಿನ ಮಾನ್ವಿಯಲ್ಲಿ 2.76 ಲಕ್ಷ ಮೌಲ್ಯದ  ಸ್ಫೋಟಕ ವಶ

ಕ್ರೈಂ ಸುದ್ದಿ

ದಾವಣಗೆರೆ ಪೊಲೀಸರ ಮಿಂಚಿನ ಕಾರ್ಯಾಚರಣೆ:  ರಾಯಚೂರಿನ ಮಾನ್ವಿಯಲ್ಲಿ 2.76 ಲಕ್ಷ ಮೌಲ್ಯದ  ಸ್ಫೋಟಕ ವಶ

ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಜ್ಜಿ ಗ್ರಾಮದಲ್ಲಿ ನಿನ್ನೆ (ಮಾ.21)  ದಾಳಿ ನಡೆಸಿ 3.62 ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದರು. ಈ ಪ್ರಕರಣದ ಖಚಿತ ಮಾಹಿತಿ ಪಡೆದ ದಾವಣಗೆರೆ ಪೊಲೀಸರು ಇಂದು (ಮಾ. 22) ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2.76 ಲಕ್ಷ ಮೌಲ್ಯದ ಸ್ಫೋಟಕವನ್ನು ವಶಕ್ಕೆ ಪಡೆದಿದ್ದಾರೆ.

ಕಾಡಜ್ಜಿ ಗ್ರಾಮ ಪ್ರಕಣದಲ್ಲಿ ಬಂಧಿತರಾದ ನಾಲ್ವರನ್ನು ಹೆಚ್ಚಿನ ವಿಚಾರಣೆ ಮಾಡಿ, ಪ್ರಕರಣ ಮೂಲ  ರಾಯಚೂರಿನಲ್ಲಿ ಇರುವ ಮಾಹಿತಿ ಮೇರೆಗೆ  ದಾವಣಗೆರೆ ಗ್ರಾಮಾಂತರ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅವರು ಜೊತೆ  ದಾವಣಗೆರೆ  ಅಪರಾಧ ಪೊಲೀಸ್ ತಂಡ ಕೂಡ ರಾಯಚೂರಿಗೆ ತೆರಳಿ ಅಕ್ರಮ ಸ್ಟೋಟಕಗಳನ್ನು  ವಶಕ್ಕೆ ಪಡೆಯಲಾಗಿದೆ.

ಪ್ರಮುಖ ಆರೋಪಿಯಾದ ಮುಜಾಹಿದ್ ಸಿದ್ಧಿಖಿ ಮಾನ್ವಿಯಲ್ಲಿ ವಾಸವಾಗಿದ್ದು,  ಪ್ರಕರಣದ ಮೊದಲ ಆರೋಪಿ ಬಿ.ಎಸ್. ವಿಕ್ರಮ್ ಗೆ ಸ್ಫೋಟಕ ವಸ್ತುಗಳನ್ನು ತಾನೇ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ಧಾನೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ ಜಿ ಕ್ಯಾಪ್ ಬಂಳಿ ಅಕ್ರಮವಾಗಿ ಸಂಗ್ರಹಿಸಿದ್ದ 2.76,000 ರೂಪಾಯಿ ಮೌಲ್ಯದ ಸ್ಫೋಟ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಸ್ಫೋಟಕ ಜಿಲೆಟಿನ್ ಕಡ್ಡಿಗಳು (50 ಬಾಕ್ಸ್ ), ಎಲೆಕ್ಟ್ರಿಕ್ ಡಿಟೋನೇಟರ್ (06 ಬಾಕ್ಸ್ ), ಅಮೋನಿಯಂ ನೈಟ್ರೇಟ್ ಪೌಡರ್ 50 ಕೆಜಿ 15 ಚೀಲವನ್ನು ವಶಕ್ಕೆ ಪಡೆಯಲಾಗಿದೆ.

kadajji case 2

ನಿನ್ನೆ ಕಾಡಜ್ಜಿ ಗ್ರಾಮದ ಸರ್ವೆ ನಂಬರ್ 54/1ಪಿ ಹಾಗೂ 53/4 ರಲ್ಲಿನ ಷಣ್ಮುಖಪ್ಪ ಎಂಬುವರಿಗೆ ಸೇರಿದ ಶ್ರೀ ದುರ್ಗಾದೇವಿ ಎಕ್ಸ್ ಪೋಸಿವ್ ಮ್ಯಾಗಜೀನ್ ಮುಂಭಾಗದಲ್ಲಿ ಸ್ಫೋಟಕಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವಾಗ ದಾಳಿ ಮಾಡಲಾಗಿದ್ದು, ಸ್ಫೋಟಕ ವಶಕ್ಕೆ ಪಡೆಯಲಾಗತ್ತು. ದಾಳಿ ವೇಳೆ ಜಿಲೆಟಿನ್  ಕಟಡ್ಡಿಗಳು , ಎಲೆಕ್ಟ್ರಿಕ್ ಡಿಟೋನೇಟರ್ ಗಳು, 04 ಕಾಯಲ್, ಅಪ್ಟೆಕ್ಸ್ ಅಮೋನಿಯಂ ನೈಟ್ರೇಟ್ ಪೌಡರ್ 50 ಕೆಜಿ 05 ಚೀಲ ಸೇರಿ ಸುಮಾರು 3.62 ಲಕ್ಷ ಸ್ಪೋಟಕ ವಶಕ್ಕೆ ಪಡೆಯಲಾಗಿದೆ. ಇನ್ನೂ ಸಾಗಾಟಕ್ಕೆ ಬಳಸಿದ್ದ ಬುಲೆರೋ ಪೊಕ್ ಅಪ್ ವಾಹನ , ಬೈಕ್ , ಪ್ಯಾಸ್ಟಿಕ್ ಪಾಟು, 29 ಪಾಕೇಟ್ ವೇಸ್ಟ್ ಕಾಟನ್ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಾದ ಬಿ.ಎಸ್ ವಿಕ್ರಮ್, ನಾಗರಾಜ್ ಕೆ, ವಿಜಯ್ ಕುಮಾರ್, ಮಂಜುನಾಥ್ ವಶಕ್ಕೆ ಪಡೆಯಲಾಗಿತ್ತು. ಗೋಡಾನ್ ಮಾಲೀಕರಾದ ಷಣ್ಮುಖಪ್ಪ ಮತ್ತು ಮುಜಿಬ್ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top