ದಾವಣಗೆರೆ: ದಾವಣಗೆರೆ ಜಿಲ್ಲೆಯ ಚಿಕ್ಕನಹಳ್ಳಿ ರಸ್ತೆಯ ಎಪಿಎಂಸಿ ಆವರಣದಲ್ಲಿರುವ ತೋಟಗಾರಿಕೆ ಇಲಾಖೆಯಿಂದ ನೂತನವಾಗಿ ಆರಂಭಗೊಂಡಿರುವ ಸಮಗ್ರ ಜೈವಿಕ ಕೇಂದ್ರದಲ್ಲಿ, ತೋಟಗಾರಿಕೆ ಬೆಳೆಗಳ ರೋಗ ನಿರ್ವಹಣೆಗೆ ವೈಜ್ಞಾನಿಕ ರೀತಿಯಲ್ಲಿ ಉತ್ಪಾದಿಸಲಾದ ಟ್ರೈಕೋಡರ್ಮಾ ಜೈವಿಕ ಗೊಬ್ಬರ ಲಭ್ಯವಿದೆ.
ಆಸಕ್ತ ರೈತರು ಜೈವಿಕ ಮತ್ತು ಜೈವಿಕ ನಿಯಂತ್ರಕ ವಿಭಾಗ, ಸಮಗ್ರ ಜೈವಿಕ ಕೇಂದ್ರ ಚಿಕ್ಕನಹಳ್ಳಿ ರಸ್ತೆ ಎಪಿಎಂಸಿ ಹಿಂಭಾಗವಿರುವ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08192-296196, 7829270190 ಅಥವಾ 9880474492 ಕ್ಕೆ ಸಂಪರ್ಕಿಸಿರಿ. ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪುಷ್ಪ ಹರಾಜು ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



