ದಾವಣಗೆರೆ: ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಇಂದು ಬೆಳಗ್ಗೆ ನಗರದ ಪೊಲೀಸರೊಂದಿಗೆ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. ಪೂರ್ವ ವಲಯ ಐಜಿಪಿ ರವಿ ಎಸ್ ಅವರು ಓಟಕ್ಕೆ ಚಾಲನೆ ನೀಡಿದರು. ಚಿತ್ರದುರ್ಗ ಎಸ್ಪಿ ಶ್ರೀಮತಿ ರಾಧಿಕಾ, ದಾವಣಗೆರೆ ಎಸ್ಪಿ ಶ್ರೀ ಹನುಮಂತರಾಯ, ಹಾವೇರಿ ಜಿಲ್ಲೆ ಎ.ಎಸ್ಪಿ. ಶ್ರೀ ಮಲ್ಲಿಕಾರ್ಜುನ ಬಾಲ್ದಂಡೆ, ದಾವಣಗೆರೆ ಮೇಯರ್ ವೀರೇಶ್ ಎಸ್.ಟಿ., ಸಾರ್ವಜನಿಕರು, ವಿದ್ಯಾರ್ಥಿಗಳು, ಚಿತ್ರದುರ್ಗ, ಹಾವೇರಿ, ದಾವಣಗೆರೆ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು. ಪೊಲೀಸರೊಂದಿಗೆ ಓಟದ ಪುರುಷರ 10km ಮತ್ತು ಮಹಿಳೆಯರ 5km ಓಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
- ಬಹುಮಾನ ವಿಜೇತರು
- ಪುರುಷರ ವಿಭಾಗ (10 ಕಿ.ಮೀ)
- ಪ್ರಥಮ: ಮಹಮದ್ ತಾಸೀನ್
- ದ್ವಿತೀಯ: ಎಂ.ಎನ್. ವಿಷ್ಣು
- ತೃತೀಯ: ಮಂಜುನಾಥ
- ಮಹಿಳೆಯರ ವಿಭಾಗ (5 ಕಿ.ಮೀ)
- ಪ್ರಥಮ: ಅಕ್ಷತಾ
- ದ್ವಿತೀಯ: ಆಫೀನಾ
- ತೃತೀಯ: ಅರ್ಚನಾ




