ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟು ಪ್ರದೇಶಗಳ ಕೊನೆಯ ಭಾಗಕ್ಕೆ ಕಾಡ ಅಧ್ಯಕ್ಷೆ ಪವಿತ್ರ ರಾಮಯ್ಯ ಭೇಟಿ ನೀಡಿ ನೀರು ನಿರ್ವಹಣೆ ಕುರಿತು ಪರಿಶೀಲನೆ ಮಾಡಿದರು.ಈ ವೇಳೆ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಲೆಬೆನ್ನೂರಿನ ನೀರಾವರಿ ಇಲಾಖೆಯಿಂದ ತಮ್ಮ ಅಚ್ಚುಕಟ್ಟು ವ್ಯಾಪ್ತಿಯ ಮಲೇಬೆನ್ನೂರು ಹೋಬಳಿಯ ಕಡನಾಯಕನಹಳ್ಳಿ, ಹೊಳೆಸಿರಿಗೆರೆ, ಕಮಲಾಪುರ ಹಾಗೂ ಭಾನುವಳ್ಳಿ ಮತ್ತು ಹರಿಹರ ತಾಲ್ಲೂಕಿನ ಬೇವಿನಹಳ್ಳಿ, ಬನ್ನಿಕೋಡು, ದೊಡ್ಡಬಾತಿ ಹಾಗೂ ಕಕ್ಕರಗೊಳ್ಳ ಗ್ರಾಮಗಳು ಕೊನೆಯ ಭಾಗಕ್ಕೆ ಸೇರಲಿದ್ದು,ಈ ಭಾಗದ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು.ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆಗೆ ಡೇಟ್ ಫಿಕ್ಸ್; 20, 22 ನೇ ವಾರ್ಡ್ ನಲ್ಲಿ ಮಾ.29 ಬೈ ಎಲೆಕ್ಷನ್ ..!
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ .ಚನ್ನಬಸವಪ್ಪ ಹಾಗೂ ರೈತ ಮುಖಂಡರು, ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು. ದಾವಣಗೆರೆ: ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ



