ಧಾರವಾಡ: ರೈತರಿಗೆ ಯಾವುದೇ ಬಗೆಯ ಗುರುತಿನ ಕಾರ್ಡ್ ಇಲ್ಲ. ಹೀಗಾಗಿ ರೈತರಿಗೆ ಸ್ವಾಭಿಮಾನಿ ರೈತ ಎಂಬ ಗುರುತಿನ ಕಾರ್ಡ್ ವಿತರಿಸಲು ಸರರ್ಕಾರ ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಜನ ಸಾಮಾನ್ಯರಿಗೆ ಬಿಗ್ ಶಾಕ್; LPG ಬೆಲೆ ಮತ್ತೆ 25 ರೂಪಾಯಿ ಏರಿಕೆ.. ಒಂದು ತಿಂಗಳ ಅಂತರದಲ್ಲಿ 4ನೇ ಸಲ ಏರಿಕೆ
ಜಿಲ್ಲೆಯ ನಲವಗುಂದ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾತನಾಡಿದ ಸಚಿವರು, ‘ನಮ್ಮ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಅನ್ನೋ ಗುರುತಿನ ಕಾರ್ಡ್ ವಿತರಿಸಲಾಗುವುದು ಎಂದರು.
ಕಾರ್ಡ್ ನಲ್ಲಿ ರೈತನ ಫೋಟೋ, ಆಧಾರ ಸಂಖ್ಯೆ, ಊರು, ವಿಳಾಸ ದಾಖಲಾಗಿರುತ್ತದೆ. ಕ್ಯೂ ಆರ್ ಕೋಡ್ ಇರುತ್ತೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 1.5 ಲಕ್ಷ ರೈತರಿಗೆ ಈ ಕಾರ್ಡ್ ತರಿಸಲಾಗುತ್ತಿದ್ದು, ಮುಂದೆ ರಾಜ್ಯದ 68 ಲಕ್ಷ ರೈತರಿಗೆ ವಿಸ್ತರಿಸಲಾಗುವುದು ಎಂದರು.



