ದಾವಣಗೆರೆ: ಮಾ.03 ರಂದು ತಾಲೂಕಿನ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆಯಲಿದೆ. ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥೋತ್ಸವ ಜರುಗಲಿದೆ.
- ಫೆ. 26 ರಂದು ನಂದಿ ಧ್ವಜಾರೋಹಣ ಹಾಗೂ ಕಳಸ ಕನ್ನಡಿ ಮತ್ತು ಸಕಲ ಬಿರುದಾವಳಿಯೊಂದಿಗೆ ವೀರಭದ್ರೇಶ್ವರ ಸ್ವಾಮಿ ಮೆರವಣಿಗೆ ನಡೆಯಲಿದೆ.
- ಫೆ. 27 ರಂದು ರಾತ್ರಿ 9ಕ್ಕೆ ಬಸವೇಶ್ವರ ಆರೋಣ ಉತ್ಸವ
- ಫೆ. 28 ರಂದು ಸರ್ಪಾರೋಹಣ ಉತ್ಸವ
- ಮಾರ್ಚ್ 1ರಂದು ರಾತ್ರಿ 8 ಗಂಟೆಗೆ ರಥಕ್ಕೆ ಕಳಸಾರೋಹಣ ಮತ್ತು ಅಶ್ವರೋಹಣ ಉತ್ಸವ
- ಮಾರ್ಚ್ 02 ರಂದು ದೊಡ್ಡ ಬಾತಿ ರೇವಣ ಸಿದ್ದೇಶ್ವರ ಸ್ವಾಮಿ ಮತ್ತು ಬೀರಲಿಂಗೇಶ್ವರ ಸ್ವಾಮಿಗಳ ಆಗಮನ
- ಮಾರ್ಚ್ 03 ರಂದು ಬೆಳಗ್ಗೆ 8ಕ್ಕೆ ಗಜಾರೋಹಣ ಉತ್ಸವ , ಸಂಜೆ 06ಕ್ಕೆ ವೀರಭದ್ರೇಶ್ವರ ಸ್ವಾಮಿ ಮಹಾ ರಥೋತ್ಸವ
ವಿಜೃಂಭಣೆಯಿಂದ ನಡೆಯಲಿರುವ ರಥೋತ್ಸವಕ್ಕೆ ಸಕಲ ಭಕ್ತಾಧಿಗಳು ಆಗಮಿಸಬೇಕು ಎಂದು ವೀರಭದ್ರೇಶ್ವರ ಮಹಾಸ್ವಾಮಿ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದ್ದಾರೆ.



