ದಾವಣಗೆರೆ: ಫೆ. 24 ರಂದು ನಡೆಯಲಿರುವ ದಾವಣಗೆರೆ ಮಹಾನಗರ ಮೇಯರ್, ಉಪಮೇಯರ್ ಚುನಾವಣೆಗೆ ಬಿಜೆಪಿ ಪಕ್ಷ ಅಕ್ರಮವಾಗಿ ಸಚಿವ ಆರ್. ಶಂಕರ್ ಹಾಗೂ ಎಂಎಲ್ಸಿ ಚಿದಾನಂದಗೌಡ ಸೇರಿದೆ. ಈ ಹೆಸರುಗಳನ್ನು ಮತದಾರ ಪಟ್ಟಿಯಿಂದ ತಗೆದು ಹಾಕಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೇಳಗಿ ಅವರನ್ನು ಭೇಟಿಯಾದ ಕಾಂಗ್ರೆಸ್ ಪಕ್ಷದ ಸದಸ್ಯರು ಮನವಿ ಸಲ್ಲಿಸಿದರು. ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಕ್ಕೇರಲು ಕಾಂಗ್ರೆಸ್ –ಬಿಜೆಪಿ ನಡುವೆ ಬಿಗ್ ಫೈಟ್
ಸಚಿವ ಆರ್. ಶಂಕರ್, ಎಂಎಲ್ಸಿ ಎಂ ಚಿದಾನಂದಗೌಡ ಅವರನ್ನು ಬಿಜೆಪಿ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದೆ. ಆರ್. ಶಂಕರ್ ಅವರು ರಾಣೆಬೆನ್ನೂರು ಮತದಾರ ಪಟ್ಟಿಯಲ್ಲಿ ಹೆಸರಿದೆ. ಹೀಗಾಗಿ ಇದು ಅಕ್ರಮವಾಗಿದ್ದು ಮತದಾರರ ಪಟ್ಟಿಯಿಂದ ಆರ್. ಶಂಕರ್ ಹೆಸರು ರದ್ದುಗೊಳಿಸುವಂತೆ ಡಿಸಿ ಅವರನ್ನು ಒತ್ತಾಯಿಸಿದರು. ದಾವಣಗೆರೆ: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಖಿಲ್ ಕೊಂಡಜ್ಜಿಗೆ ಗೆಲುವು
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ಸದಸ್ಯರಾದ ಶಿವಕುಮಾರ್ ದೇವರಮನೆ, ಗಡಿಗುಡಾಳ್ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



