Connect with us

Dvgsuddi Kannada | online news portal | Kannada news online

ಬಿಜೆಪಿಯವರು ಬ್ಯ್ಯಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ

ರಾಜಕೀಯ

ಬಿಜೆಪಿಯವರು ಬ್ಯ್ಯಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ

ದಾವಣಗೆರೆ: ಬಿಜೆಪಿಯ ಎಲ್ಲರರೂ ಬ್ಲ್ಯಾಕ್ ಮೇಲ್ ಗಿರಾಕಿಗಳು. ಒಬ್ಬರು, ಇಬ್ಬರು ಅಲ್ಲ ಎಲ್ಲರೂ ಅವರೇ ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಮುಖಂಡ ಎಚ್ . ವಿಶ್ವನಾಥ್  ಸಿಡಿ ನಾಳೆ ಹೊರ ಬರುತ್ತೇ ಎಂದು ಹೇಳಿದ್ದಾರೆ. ಹೀಗಾಗಿ ಸಿಡಿ ಬಗ್ಗೆ ಸೂಕ್ತ ತನಿಖೆ ಆಗಬೇಕು. ತನಿಖೆ ಆದ ಮೇಲೆ ಸತ್ಯ ಗೊತ್ತಾಗಲಿದೆ ಎಂದು ತಿಳಿಸಿದರು.   ಯಡಿಯೂರಪ್ಪ ಸರ್ಕಾರ ಪಾಪದ ಸರ್ಕಾರ. ನೈತಿಕತೆಯಿಂದ ಬಂದಿಲ್ಲ, ಅಕ್ರಮವಾಗಿ ಸರ್ಕಾರ ರಚನೆ ಆಗಿದೆ ಎಂದರು.

ಸಿಡಿಯಲ್ಲಿ ಕೆಟ್ಟದಾಗಿ ಇದೆ ಎಂದು ಹೇಳುತ್ತಾರೆ. ಬಿಡುಗಡೆ ಮಾಡಲಿ, ಅದರಲ್ಲಿರುವ ಸತ್ಯ ತನಿಖೆಯಿಂದ ಹೊರಬರಲಿ. ಬಿಜೆಪಿಯಲ್ಲಿ ಈಗ ಕೆಲವರು ಆರೋಪ ಮಾಡುತ್ತಿದ್ದಾರೆ‌. ಶಾಸಕರನ್ನ ಖರೀದಿ ಮಾಡಿ ಬಂದಿದ್ದ,  ಈಗ ಒಂದೊಂದಾಗಿ ಹೊರ ಬರುತ್ತಿದೆ.

ನಾನು ಎಸ್ ಟಿ ವಿರೋಧಿಯಲ್ಲ, ಕುರುಬರಿಗೆ ಎಸ್ ಟಿ ಮೀಸಲಾತಿಗಾಗಿ ಕನಕಗುರುಪೀಠದ ಸ್ವಾಮೀಜಿ ಇಂದು ಪಾದಯಾತ್ರೆ ಆರಂಭಿಸಿದ್ದಾರೆ. ಆದ್ರೆ ನಾನು ಎಸ್ ಟಿ ವಿರೋಧಿಯಲ್ಲ ಎಂದು ತಿಳಿಸಿದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top