ದಾವಣಗೆರೆ: ಯಾವ ಸಿಡಿಗೂ ನಾನು ಹೆದರುವುದಿಲ್ಲ. ಮಾತನಾಡೋವರು ಏನು ಬೇಕಾದರೂ ಮಾತನಾಡಿಲಿ. ನನ್ನ ಇತಿ ಮಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನವಿದ್ದರೆ, ವರಿಷ್ಠರಿಗೆ ದೂರು ನೀಡಲಿ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕೇಂದ್ರ ನಾಯಕರ ಅಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಇಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಿದ್ದೇನೆ. 12 ಜನ ನನ್ನ ಮಂತ್ರಿ ಮಾಡಿಲ್ಲ ಅಂತಾ ಆರೋಪ ಮಾಡುತ್ತಿದ್ದಾರೆ. ನೀವು ನಿಜವಾಗಲೂ ಆರೋಪ ಮಾಡುವಂತಿದ್ದರೆ, ಕೇಂದ್ರ ನಾಯಕ ಬಳಿ ಹೋಗಿ ದೂರು ನೀಡಲಿ. ಇನ್ನು ಉಳಿದ 2 ವರ್ಷ ನಾನೇ ಸಿಎಂ ಆಗಿರಲಿದ್ದೇನೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟು ಆರ್ಶೀವಾದ ಮಾಡಿದ್ದಾರೆ ಎಂದರು.
ಇನ್ನು ಎರಡು ವರ್ಷ ರಾಜ್ಯವನ್ನು ಅಭಿವೃದ್ಧಿ ಕಡೆ ಗಮನ ಕೊಡುತ್ತೇನೆ. ಈ ತಿಂಗಳ ಅಂತ್ಯದಲ್ಲಿ ಅಧಿವೇಶನದಲ್ಲಿ ನಡೆಯಲಿದೆ. ಮಾರ್ಚ್ ನಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ರೈತಪರ ಬಜೆಟ್ ಮಂಡನೆ ಮಾಡತ್ತೇನೆ.



