ದಾವಣಗೆರೆ: ನಗರದ ಎಮ್.ಸಿ.ಸಿ.’ಬಿ’ ಹಾಗೂ ಜಯನಗರ ಫೀಡರ್ ನಲ್ಲಿ ಬೆ.ವಿ.ಕಂ. ವತಿಯಿಂದ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ (ಜ.04) ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಮ್.ಸಿ.ಸಿ.’ಬಿ’ ಫೀಡರ್ ವ್ಯಾಪ್ತಿಯ ಕುವೆಂಪು ನಗರ 5,6 &7ನೇ ಕ್ರಾಸ್, ಬೂಸ್ನೂರ್ ಪ್ರಿಂಟರ್ ಸುತ್ತಮುತ್ತ, ಪವನ್ ಬಾರ್& ವುಡನ್ಕಲ್ಚರ್, ಶಾಪ್ ಸುತ್ತಮುತ್ತ ಹಾಗೂ ಜಯನಗರ ಫೀಡರ್ ವ್ಯಾಪ್ತಿಯ ಜಯನಗರ ಎ, ಬಿ & ಸಿ ಬ್ಲಾಕ್,ಭಗೀರಥ ಸರ್ಕಲ್, ಜಯನಗರಚರ್ಚ್,ಹಾಗು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



