ಹರಿಹರ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಹರಿಹರ ನಗರ ಪೊಲೀಸರು ಬಂಧಿಸಿದ್ದಾರೆ. ವಿನೋದ (19) ಬಂಧಿತ ಆರೋಪಿಯಾಗಿದ್ದು,100 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ವಿಚಾರಣೆ ಮಾಡಿದಾಗ ಹರಿಹರ ನಗರದ ತರಕಾರಿ ಮಾರುಕಟ್ಟೆಯಲ್ಲಿ100 ರೂಪಾಯಿ ಮುಖ ಬೆಲೆ ಬಾಳುವ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಆರೋಪಿಯಿಂದ 14 ಖೋಟಾ ನೋಟುಗಳು ಮತ್ತು ಕೃತ್ಯಕ್ಕೆ ಬಳಸಿದ ಜೆರಾಕ್ಸ್ ಮೆಷಿನ್ ವಶಪಡಿಸಿಕೊಂಡಿರುತ್ತಾರೆ.
ಮೂಲತಃ ಹರಿಹರದ ತರಕಾರಿ ಮಾರುಕಟ್ಟೆ ಹತ್ತಿರದ ನಿವಾಸಿಯಾಗಿದ್ದು ರಿಲಯನ್ಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದಾವಣಗೆರೆಯ ಗ್ರಾಮಾಂತರ ಉಪ ಅಧೀಕ್ಷಕರಾದ ನರಸಿಂಹ ವಿ ತಾಮ್ರಧ್ವಜ , ವೃತ್ತನಿರಕ್ಷಕ ಶಿವಪ್ರಸಾದ್ ಎಂ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ ಐ ಸುನಿಲ್ ಬಸರವಾಜ್ ನೇತ್ರತ್ವದಲ್ಲಿ ಎಎಸ್ ಐ ಯಾಶಿನ್ಉಲ್ಲಾ ಪೊಲೀಸ್ ಪೇದೆಗಳಾದ ಎನ್ ಎಂ ದ್ವಾರಕೀಶ್. ಮಂಜುನಾಥ್ .ದೇವರಾಜ್. ಸಿದ್ದರಾಜು , ಟಿ ವಿ ಸತೀಶ್ , ನಾಗರಾಜ್ ಸುಣಗಾರ , ಶಿವಪದ್ಮ , ಖೋಟಾ ನೋಟು ಜಾಲ ಪ್ರಕರಣದ ತನಿಖೆಯಲ್ಲಿ ಇದ್ದರು.



