ಬೆಂಗಳೂರು: ಆತ್ಮಹತ್ಯೆ ಯತ್ನದಿಂದ ಆತ್ಪತ್ರೆಗೆ ಸೇರಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಕಳೆದ ಮೂರು ದಿನದ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಊಟದ ಮಾಡಿದ ಪರಿಣಾಮ ಅಜೀರ್ಣವಾಗಿತ್ತು. ಬೇರೆ ಮಾತ್ರೆ ತಗೆದುಕೊಂಡ ಪರಿಣಾಮ ಈ ರೀತಿಯಾಗಿದೆ. ರಾಜಕೀಯ ಒತ್ತಡ ಎಲ್ಲಾ ಕಾಲಕ್ಕೂ ಇರುತ್ತೆ, ಆದರೆ ಮಾತ್ರೆ ತಗೋಳ್ಳುವ ಸ್ವಭಾವ ಇಲ್ಲ. ನಿದ್ರೆ ಬರದೆ ಇದ್ದಾಗ ಮಾತ್ರೆ ತಗೊಳ್ಳುತ್ತಿದೆ. ಬೇರೆ ಮಾತ್ರೆ ತಗೊಂಡ ಪರಿಣಾಮ ಈ ರೀತಿಯಾಗಿದೆ ಎಂದು ಹೇಳಿದರು.



