ಚನ್ನಗಿರಿ: ತಾಲ್ಲೂಕಿನ ಸೂಳೆಕೆರೆಯ ನೀರನ್ನು ಭೀಮಸಮುದ್ರಕ್ಕೆ ಹರಿಸುವ ಹುನ್ನಾರ ವನ್ನು ನಾನು ಎಂದಿಗೂ ಮಾಡಿಲ್ಲ. ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಃ ನೀರು ಖಾಲಿ ಮಾಡುವ ಚಿಂತನೆ ನಮ್ಮದಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಮೈ ತುಂಬಿದ ಕಾರಣ ಬಾಗಿನ ಅರ್ಪಿಸಿ, ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ವೇದಿಕೆ ಕಾರ್ಯ ಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
2009ರಲ್ಲಿ ಡ್ಯಾಂನಲ್ಲಿ ನೀರು ಕುಸಿತ ಕಂಡಿತ್ತು. ಮಳೆ ಸಮರ್ಪಕವಾಗಿ ಬಾರದ ಕಾರಣ ಸೂಳೆಕೆರೆ ಬರಿದಾ ಗಿತ್ತು. ಆದರೆ, ಈ ಸಂದರ್ಭದಲ್ಲಿ ಸೂಳೆಕೆರೆ ನೀರಿನ್ನು ಭೀಮಸಮುದ್ರಕ್ಕೆ ಕೊಂಡೊಯ್ದು ನನ್ನ ಅಡಿಕೆ ತೋಟಕ್ಕೆ ನೀರನ್ನು ಹಾಕಿರುವುದಾಗಿ ಕೆಲ ವಿರೋಧಿಗಳು ನನ್ನ ಮೇಲೆ ಸುಳ್ಳು ಅಪಪ್ರಚಾರ ಮಾಡಿದ್ದರು. ಈ ಅಪಪ್ರಚಾರವನ್ನು ಜನರು ನಂಬಿದ್ದರು. ಇದರಿಂದ ನನಗೆ ವೈಯಕ್ತಿಕವಾಗಿ ಬಹಳ ದುಃಖವಾಗಿ ಕಣ್ಣೀರು ಹಾಕಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಜನರಿಗೆ ಅಪಪ್ರಚಾರದ ಸತ್ಯಾಂಶ ತಿಳಿಯಿತು. ತದ ನಂತರ ನಡೆದ ಚುನಾವಣೆಯಲ್ಲಿ ಚನ್ನಗಿರಿ ಮತದಾರರು ನನ್ನ ಕೈಹಿಡಿದು 2024 ಮತಗಳ ಅಂತರದಿಂದ ಗೆಲುವು ತಂದುಕೊಟ್ಟರು. ಈ ಮೂಲಕ ನನ್ನ ಮೇಲಿದ್ದ ಅಪಪ್ರಚಾರಕ್ಕೆ ತೆರೆ ಎಳೆದಂತಾಯಿತು ಎಂದು ತಿಳಿಸಿದ್ದಾರೆ.



