ದಿವಿಜಿ ಸುದ್ದಿ.ಕಾಂ, ದಾವಣಗೆರೆ: ಇಲ್ಲಿನ ಎಸ್ಜಿಎಂ ನಗರದ ೧ನೇ ವಾರ್ಡ್ ನಿವಾಸಿ ಬಸವರಾಜ್ ಎಂಬುವರ ಕಟ್ಟಡ ಮೇಲೆ ಟವರ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ವಾರ್ಡ್ ನಾಗರಿಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ನಗರದ ಎಸ್ ಜೆ ಎಂ 1ನೇ ವಾರ್ಡ್ ಬಸವರಾಜ್ ಎಂಬಾತ ಎಂ.ಜಿ.ಬಿಲ್ಡಿಂಗ್ ಖರೀದಿಸಿದ್ದಾರೆ. ಈಗ ತಮ್ಮ ಕಟ್ಟಡ ಮೇಲೆ ಟವರ್ ಅಳವಡಿಸಲು ಮುಂದಾಗಿದ್ದಾರೆ. ಇದರಿಂದ ಸುತ್ತಮುತ್ತಲಿನ ನಾಗರಿಕರಿಗೆ, ಗರ್ಭೀಣಿಯರಿಗೆ, ಚಿಕ್ಕಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಆದ್ದರಿಂದ ಟವರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಇದಲ್ಲದೆ ಕಟ್ಟಡ ಹಿಂಬದಿ ಅಂಗನವಾಡಿ ಕೇಂದ್ರವಿದ್ದು, ಅಂಗನವಾಡಿಯಲ್ಲಿ ಸುಮಾರು 30 ರಿಂದ 40 ಮಕ್ಕಳು ಪ್ರತಿನಿತ್ಯ ಬರುತ್ತಾರೆ. ಟವರ್ ಅಳಡಿಸಿರುವುದರಿಂದ ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಇಲ್ಲಿನ ಹೃದ್ರೋಗಿಗಳಿಗೂ ಸಹ ತುಂಬಾ ತೊಂದರೆ ಉಂಟಾಗುತ್ತದೆ. ಮೊಬೈಲ್ ಕಂಟ್ರೋಲರ್ ಹಾಕುವುದರಿಂದ ಅವುಗಳ ಸಿಗ್ನಲ್ ಗಳು, ತರಂಗಳಿಂದ ನಾಗರಿಕರಿಗೆ ತುಂಬಾ ಅಪಾಯಕಾರಿಯಾಗಿರುತ್ತದೆ ಎಂದರು.
ಪ್ರತಿಭಟನೆಯಲ್ಲಿ ನಾಗಮ್ಮ, ಶಾರದಮ್ಮ, ಪೂಜಾ, ಶಾಂತಮ್ಮ, ಲಕ್ಷ್ಮಿಬಾಯಿ, ಸುಮಿತ್ರ, ಶೋಭಾ, ಪದ್ಮ, ರತ್ನಮ್ಮ, ಗೀತಾ, ದರ್ಗಮ್ಮ, ಆಸ್ಮ,ನಾಗರತ್ನ, ಸಬ್ರಿನ್ ತೇಜ್, ಚಂದ್ರಮ್ಮ ಸೇರಿದಂತೆ ಮತ್ತಿತರರಿದ್ದರು.



