ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಗರದ ತ್ರಿಶೂಲ್ ,ಎಸ್ಎಸ್ ಮಾಲ್ ನಲ್ಲಿ ಪರ ಭಾಷೆಯಲ್ಲಿ ಸೈರಾ ಚಲನಚಿತ್ರ ಪ್ರದರ್ಶನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡ ಸಂಭಾಷಣೆಯಲ್ಲಿರುವ ಸೈರಾ ಚಲನಚಿತ್ರ ಪ್ರದರ್ಶಿಸದೆ, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಚಲನಚಿತ್ರ ಪ್ರದರ್ಶಿಸುತ್ತಿರುವ ತ್ರಿಶೂಲ ಮತ್ತು ಎಸ್ ಎಸ್ ಮಾಲ್ ಮುಂದೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹರೀಶ್, ಪ್ರವೀಣ್ ,ಪ್ರತಾಪ್, ಅಪ್ಪು , ಮಲ್ಲಿಕಾರ್ಜುನ್ , ಬಸವರಾಜ್, ಪರಮೇಶ್, ಮಂಜುನಾಥ್, ಗೋಪಾಲ , ದೇವರಮನೆ ಸಂತೋಷ್, ಖಾದರ್ , ರಮೇಶ್, ಯೂನಿಫ್ ಉಪಸ್ಥಿತರಿದ್ದರು.



