ಡಿವಿಜಿ ಸುದ್ದಿ, ತುಮಕೂರು: ಚಿರು ನನ್ನ ತಮ್ಮನಂತೆ ಇದ್ದ. ನನಗೆ ಬಹಳ ಬೇಕಾದ ಹುಡುಗ. ಅವನು ಕೂಡ ತಮ್ಮನ ರೀತಿಯೇ ನಡೆದುಕೊಳ್ಳುತ್ತಿದ್ದನು. ಈಗ ಅವನ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸುದೀಪ್ ಹೇಳಿದರು.
ಸಿದ್ಧಗಂಗಾ ಮಠಕ್ಕೆ ಇಂದ್ರಜಿತ್ ಲಂಕೇಶ್ ಅವರ ಜೊತೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಚಿರು ಬಗ್ಗೆ ಮತ್ತೆ ಕೆದಕಿ ಮಾತನಾಡುವುದು ಬೇಡ. ಅಷ್ಟೇ ಅಲ್ಲದೇ ಅವರಿಗೂ ಒಂದು ಕುಟುಂಬದ ಇದೆ. ಸುಂದರವಾದ ತಮ್ಮ ಇದ್ದಾನೆ. ಅಣ್ಣನ ಅಗಲಿಕೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೆಂಡತಿ ಇದ್ದಾರೆ, ಹೀಗಾಗಿ ಅವನ ಬಗ್ಗೆ ಮಾತನಾಡುವುದು ಬೇಡ ಎಂದರು.

ಬೇರೆಯವರಿಗೆ ಸಲಹೆ ಕೊಡಲು ನಾವು ಯಾರು? ಜೀವನದಲ್ಲಿ ಯಾರಿಗೂ ಸಲಹೆ ಕೊಡಬಾರದು. ಯಾಕೆಂದರೆ ಕಲಿಯೋರು ಕಲಿಯುತ್ತಾರೆ. ಬದುಕು ಅನುಭವ ಕಲಿಸುತ್ತದೆ ಎಂದರು.
ನಾನು ಹುಟ್ಟುಹಬ್ಬ ಆಚರಿಸುವುದನ್ನು ನಿಲ್ಲಿಸಿ ತುಂಬಾ ವರ್ಷಗಳಾಗಿವೆ. ನನ್ನ ಸ್ನೇಹಿತರೆ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ವರ್ಷ ನಮ್ಮ ಪೋಷಕರೊಂದಿಗೆ ಸಮಯ ಕಳೆದಿದ್ದೇನೆ. ಇದರಿಂದ ನನಗೆ ಖುಷಿಯಾಗಿದೆ. ಜೊತೆಗೆ ಯಾರನ್ನೂ ಭೇಟಿ ಆಗದಿರುವುದಕ್ಕೆ ನೋವಿದೆ ಎಂದರು.
ಇಂದ್ರಜಿತ್ ಅವರು ನನಗೆ ತುಂಬಾ ವರ್ಷಗಳಿಂದ ಗೊತ್ತು. ಆದರೆ ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ನನಗಿಲ್ಲ ಎಂದು ತಿಳಿಸಿದರು.



