ಡಿವಿಜಿ ಸುದ್ದಿ, ಹರಿಹರ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ತಾಲ್ಲೂಕಿನ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಮಾಡಲಾಯಿತು. ಶ್ರೀ ವಚನಾನಂದ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಬಾದಾಮಿ ಕರಿಬಸಪ್ಪ, ಶ್ರೀಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಜಿಲ್ಲಾ ಘಟಕದ ಅಧ್ಯಕ್ಷ ರಶ್ಮಿ ನಾಗರಾಜ್ ಕುಂಕೋದ್, ವಸಂತ ಹುಲ್ಲತ್ತಿ, ವೀಣಾ ಕೊಟ್ರೇಶ್, ವಾಣಿಗುರು, ಸಂಗೀತ ಗಣೇಶ್, ನಗರ ಘಟಕ ಕಾರ್ಯದರ್ಶಿ ಶಶಿಕಲಾ ಶಿವಲಿಂಗಪ್ಪ ಪದಾಧಿಕಾರಿಗಳು ಭಾಗವಹಿಸಿದ್ದರು.



