ಡಿವಿಜಿ ಸುದ್ದಿ, ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯ ಓಲೈಕೆ ಬೆಂಗಳೂರಿನ ಹಿಂಸಾಚಾರ ಪ್ರಕರಣಕ್ಕೆ ಕಾರಣ. ಇದು ಮುಂದುವರಿದರೆ ಮುಂದೊಂದು ದಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಮನೆಗೂ ಪುಂಡರು ಬೆಂಕಿ ಹಚ್ಚುತ್ತಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಬದಲು ಬಾಬರ್ನನ್ನು ಕೈ ಹಿಡಿದಿದ್ದು, ಹಜ್ ಯಾತ್ರೆಗೆ ಸಬ್ಸಿಡಿ ನೀಡಿ ಓಲೈಸಿದ್ದರಿಂದ ಹಿಂಸಾಚಾರ ನಡೆಯುತ್ತಿವೆ. ಕಾಂಗ್ರೆಸ್ ಸಾಕಿದ ಗಿಣಿ ಈಗ ಅವರನ್ನೇ ಕಚ್ಚುತ್ತಿದೆ. ಪುಂಡರು ಮುಂದೆ ವಿಧಾನಸೌಧಕ್ಕೂ ಬೆಂಕಿ ಹಚ್ಚಿದರು ಅಚ್ಚರಿ ಇಲ್ಲ ಎಂದರು.
ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ನವೀನ್ನನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಆಟವಾಡುತ್ತಿದೆ. ಬಶೀರ್ ಎಂಬಾತ ರಾಮನ ಬಗ್ಗೆ ಅಶ್ಲೀಲವಾಗಿ ಪೋಸ್ಟರ್ಗಳನ್ನು ಪ್ರಕಟಿಸಿದ್ದ, ಭಗವದ್ಗೀತೆಯನ್ನು ಸುಡುತ್ತೇನೆ ಎಂದು ಅಬ್ಬರಿಸಿದ್ದ. ನಾವು ಆತನ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಹೋರಾಡುತ್ತಿದ್ದೇವೆ. ಅದೇ ರೀತಿ ನವೀನ್ ವಿರುದ್ಧ ಕಾನೂನು ಹೋರಾಟ ಬಿಟ್ಟು, ಹಿಂಸಾಚಾರ ನಡೆಸಿದ್ದು ಪೂರ್ವಯೋಜಿತ ಕೃತ್ಯ. ಇಂತಹವರನ್ನು ಹೆಡೆಮುರಿ ಕಟ್ಟಲು ಇದು ಸರಿಯಾದ ಸಮಯ ಎಂದರು.



