Connect with us

Dvgsuddi Kannada | online news portal | Kannada news online

SSLC ಫಲಿತಾಂಶ: 17ನೇ ಸ್ಥಾನಕ್ಕೆ ಕುಸಿದ ದಾವಣಗೆರೆ ಜಿಲ್ಲೆ

ದಾವಣಗೆರೆ

SSLC ಫಲಿತಾಂಶ: 17ನೇ ಸ್ಥಾನಕ್ಕೆ ಕುಸಿದ ದಾವಣಗೆರೆ ಜಿಲ್ಲೆ

ಡಿವಿಜಿ ಸುದ್ದಿ, ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಿಂದಿನ ವರ್ಷ ವರ್ಷ 9ನೇ ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆ,  ಈ ಬಾರಿ 17 ಸ್ಥಾನಕ್ಕೆ ಕುಸಿತ ಕಂಡಿದೆ.

2017–18ರಲ್ಲಿ ಶೇ 81.56 ಫಲಿತಾಂಶ ಪಡೆದು 15ನೇ ಸ್ಥಾನದಲ್ಲಿದ್ದ ಜಿಲ್ಲೆ ಕಳೆದ ವರ್ಷದ ಶೇ 85.94 ಫಲಿತಾಂಶ ಪಡೆದು 9ನೇ ಸ್ಥಾನಕ್ಕೇರಿತ್ತು. ಆದರೆ, ಈ ಬಾರಿ 17 ಸ್ಥಾನಕ್ಕೆ ಕುಸಿತ ಕಂಡಿದೆ.

  ಶೇ 75ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಗಳನ್ನು ಎ, ಶೇ 60ರಿಂದ ಶೇ 75 ಪಡೆದ ಜಿಲ್ಲೆಗಳನ್ನು ‘ಬಿ’, ಶೇ 60ಕ್ಕಿಂತ ಕಡಿಮೆ ಇರುವುದನ್ನು ‘ಸಿ’ ಕೆಟಗರಿ ಎಂದು ಗುರುತಿಸಿದೆ. ದಾವಣಗೆರೆ ‘ಬಿ’ ಕೆಟಗರಿಯಲ್ಲಿದೆ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಹರಿಹರದ ಅಭಿಷೇಕ್ ರಾಜ್ಯಕ್ಕೆ ಪ್ರಥಮ: ಕನ್ನಡ ಮಾಧ್ಯಮದಲ್ಲಿ ಹರಿಹರ ಎಂಕೆಟಿಎಲ್‌ಕೆ ಪ್ರೌಢ ಶಾಲೆಯ ಅಭಿಷೇಕ್‌ ಎಂ. 623 ಅಂಕ ಗಳಿಸಿ ರಾಜ್ಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಕೆ‍ಪಿಎಸ್‌ ಪ್ರೌಢಶಾಲೆಯ ದಿವ್ಯತೇಜಾ 622 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಅನುಭವ ಮಂಟಪ ಎಸ್‌ಟಿಜೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಂಹಿತಾ ಎಸ್‌., ಜ್ಞಾನಶ್ರೀ ಎಸ್‌., ಸಿದ್ಧಗಂಗಾ ಪ್ರೌಢಶಾಲೆಯ ಆಕಾಶ್‌ ಆರ್‌. 623 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ಅನುಭವ ಮಂಟಪ ಎಸ್‌ಟಿಜೆಯ ಸಂಜನಾ ಎಸ್‌.ಆರ್‌., ಹೊನ್ನಾಳಿ ಸ್ಟೆಲ್ಲಾ ಮೇರಿಸ್‌ ಪ್ರೌಢಶಾಲೆಯ ನಿತ್ಯಾಶ್ರೀ, ತುರ್ಚಘಟ್ಟ ಗುರುಕುಲದ ಲಕ್ಷ್ಮೀ ಎನ್‌. 622 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಜಗಳೂರು ಎನ್‌ಎಂಕೆಎಚ್‌ನ ಅಮಿತ್‌ ಡಿ.ಕೆ., ಚನ್ನಗಿರಿ ನವಚೇತನದ ಕೀರ್ತನಾ ಬಿ. 621 ಅಂಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಜಿಲ್ಲೆಯಲ್ಲಿ 133 ಸರ್ಕಾರಿ ಪ್ರೌಢಶಾಲೆ, 172 ಅನುದಾನಿತ ಪ್ರೌಢಶಾಲೆ, 143 ಅನುದಾನ ರಹಿತ ಪ್ರೌಢಶಾಲೆಗಳ 21 ಸಾವಿರ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು.

ಇನ್ನು ಜಗಳೂರು ವಲಯ ಎ ಗ್ರೇಡ್‌ ಪಡೆದಿದೆ. ಹರಿಹರ, ಹೊನ್ನಾಳಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಚನ್ನಗಿರಿ ವಲಯಗಳು ಬಿ ಗ್ರೇಡ್‌ ಪಡೆದಿವೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top