ಡಿವಿಜಿ ಸುದ್ದಿ, ಬೆಂಗಳೂರು: ಅಭಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಆತ್ಮನಿರ್ಭರ ಮುಖವಾಡ ಕಳಚಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸುವ ಮೂಲಕ ನರೇಂದ್ರ ಮೋದಿ ಅವರ ಆತ್ಮನಿರ್ಭರ ದ ಮುಖವಾಡ ಕಳಚಿಬಿದ್ದಿದೆ. ನೀತಿ ನಿರೂಪಣೆ, ಕಾರ್ಯಕ್ರಮಗಳ ಮೇಲುಸ್ತುವಾರಿ ಮತ್ತು ಕುಂದುಕೊರತೆಗಳ ನಿವಾರಣೆಯ ಕೆಲಸ ಮಾಡುತ್ತಾ, ಕೇಂದ್ರ ಸರ್ಕಾರ ಮತ್ತು ನೇಕಾರರ ನಡುವೆ ಕೊಂಡಿಯಂತಿದ್ದ ಮಂಡಳಿ ರದ್ದತಿ ಖಂಡನೀಯ ಎಂದು ಅವರು ಟ್ವೀಟ್ ಮೂಲಕ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸುವ ಮೂಲಕ @narendramodi ಅವರ 'ಆತ್ಮನಿರ್ಭರ'ದ ಮುಖವಾಡ ಕಳಚಿಬಿದ್ದಿದೆ.
ನೀತಿ ನಿರೂಪಣೆ, ಕಾರ್ಯಕ್ರಮಗಳ ಮೇಲುಸ್ತುವಾರಿ ಮತ್ತು ಕುಂದುಕೊರತೆಗಳ ನಿವಾರಣೆಯ ಕೆಲಸ ಮಾಡುತ್ತಾ, ಕೇಂದ್ರ ಸರ್ಕಾರ ಮತ್ತು ನೇಕಾರರ ನಡುವೆ ಕೊಂಡಿಯಂತಿದ್ದ ಮಂಡಳಿ ರದ್ದತಿ ಖಂಡನೀಯ. pic.twitter.com/g3CUASIVfu— Siddaramaiah (@siddaramaiah) August 8, 2020
ಜುಲೈ 27ರಂದು ಕೇಂದ್ರ ಸರ್ಕಾರ ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ಕೂಡಲೇ ರದ್ದು ಮಾಡಿರುವುದಾಗಿ ಪ್ರಕಟಿಸಿತ್ತು.



