Connect with us

Dvgsuddi Kannada | online news portal | Kannada news online

ಪ್ರಧಾನಿ ಅಭ್ಯರ್ಥಿ ಹುಚ್ಚನಾಗಿರಬಾರದೆಂದು ರಾಹುಲ್ ಗಾಂಧಿಯನ್ನು ತರಾಟೆಗೆ ತಗೆದುಕೊಂಡ ಸಂಸದ ಬಸವರಾಜು

ಪ್ರಮುಖ ಸುದ್ದಿ

ಪ್ರಧಾನಿ ಅಭ್ಯರ್ಥಿ ಹುಚ್ಚನಾಗಿರಬಾರದೆಂದು ರಾಹುಲ್ ಗಾಂಧಿಯನ್ನು ತರಾಟೆಗೆ ತಗೆದುಕೊಂಡ ಸಂಸದ ಬಸವರಾಜು

ಡಿವಿಜಿ ಸುದ್ದಿ, ತುಮಕೂರು:  ಪುಲ್ವಾಮ ದಾಳಿ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ ರಾಹುಲ್ ಗಾಂಧಿಯನ್ನು ತುಕಮೂರು ಸಂಸದ ಜಿ.ಎಸ್. ಬಸವರಾಜು ತರಾಟೆಗೆ ತಗೆದುಕೊಂಡಿದ್ದು,  ಪ್ರಧಾನಿ ಅಭ್ಯರ್ಥಿ ಭಾರತೀಯ ಪ್ರಜೆಯಾಗಿರಬೇಕು, ಹುಚ್ಚನಾಗಿರಬಾರದು ಎಂದ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಪುಲ್ವಾಮಾ ದಾಳಿಯಿಂದ ಯಾರಿಗೆ ಲಾಭವಾಯ್ತು ಎಂಬ ರಾಹುಲ್ ಗಾಂಧಿ ಟ್ವೀಟ್ ಅನ್ನು ಜಿ.ಎಸ್ ಬಸವರಾಜು ಖಂಡಿಸಿದ್ದಾರೆ. ಮುಂದಿನ ಪ್ರಧಾನಿ ಅಭ್ಯರ್ಥಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರಲ್ಲ ಎಂದು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ  ಜಿ.ಎಸ್ ಬಸವರಾಜು ಅವರು ಈ ರೀತಿ ಹೇಳಿದರು.

ಪ್ರಧಾನಿ ಆಗುವವರಿಗೂ ಅರ್ಹತಾ ಮಟ್ಟ ಇದೆ. ನನಗೂ ಪ್ರಧಾನಿ ಆಗಬೇಕೆಂಬ ಚಟ ಇದೆ. ಪ್ರಧಾನಿ ಅಭ್ಯರ್ಥಿ ಭಾರತೀಯನಾಗಿರಬೇಕು ಹೊರತು ಹುಚ್ಚನಾಗಿರಬಾರದು ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಪುಲ್ವಾಮಾ ದಾಳಿ ರಾಹುಲ್ ಗಾಂಧಿಯೇ ಮಾಡಿಸಿರಬೇಕು ಸೈದ್ಧಾಂತಿಕ ಬದ್ಧತೆ, ಸೈದಾಂತಿಕ ಅರಿವು ಇದ್ದವರಿಗೆ ಏನಾದರೂ ಹೇಳಬಹುದು, ಆದರೆ ರಾಹುಲ್ ಗಾಂಧಿಗೆ ಅದ್ಯಾವುದೂ ಇಲ್ಲ ಎಂದರು.

ನಾನು ಕೂಡ ಕಾಂಗ್ರೆಸ್ಸಿನಲ್ಲಿ ಇದ್ದೆ.  ಒಳ್ಳೆಯವರು ಯಾರು ಈಗ  ಕಾಂಗ್ರೆಸ್ಸಿನಲ್ಲಿ ಉಳಿದಿಲ್ಲ.  ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳುವಂತೆ ಈಗ ಕಾಂಗ್ರೆಸ್ಸಿನಲ್ಲಿ ಬರೀ ಕಳ್ಳರೇ ತುಂಬಿಕೊಂಡಿದ್ದಾರೆ ಎಂದು ಆರೋಪಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top