Connect with us

Dvgsuddi Kannada | online news portal | Kannada news online

ದಾವಣಗೆರೆ: ಟಿಪ್ಪರ್ ಲಾರಿ-ಬೈಕ್ ಡಿಕ್ಕಿ; ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವು

ಚನ್ನಗಿರಿ

ದಾವಣಗೆರೆ: ಟಿಪ್ಪರ್ ಲಾರಿ-ಬೈಕ್ ಡಿಕ್ಕಿ; ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವು

ದಾವಣಗೆರೆ: ಟಿಪ್ಪರ್ ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಾಲೇಶಪುರದ ಬಳಿ ಇಂದು (ಅ.17) ಬೆಳಗ್ಗೆ 12 ಗಂಟೆಗೆ ನಡೆದಿದೆ.

ಅಪಘಾತದಲ್ಲಿ ಹಾಲೇಶಪುರ ಗ್ರಾದ ರಮೇಶ ಕೆ.ವಿ ( 23), ಹರಪನಹಳ್ಳಿ ಕುಲಹಳ್ಳಿ ಬೋವಿ ರಮೇಶ (29) ಮೃತಪಟ್ಟವರಾಗಿದ್ದಾರೆ. ಹಾಲೇಶಪುರ ಗ್ರಾಮದ ತಿರುವಿನ ಬಳಿ ಗುಡ್ಡದಕೋಮಾರನಹಳ್ಳಿ ಗ್ರಾಮದ ಕಡೆಯಿಂದ ಬರುತ್ತಿದ್ದ ಲಾರಿ ಅತೀವೇಗ ಬಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರರಿಗೆ ಡಿಕ್ಕಿಯಾಗಿದೆ. ತೀವ್ರವಾಗಿ ಪೆಟ್ಟು ಬಿದ್ದ ಯುವಕರು ಸ್ಥಳ್ಲಿಯೇ ಪ್ರಾಣ‌ ಬಿಟ್ಟಿದ್ದಾರೆ. ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ. ಮೃತದೇಹಗಳನ್ನು ಚನ್ನಗಿರಿ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top